ನವದೆಹಲಿ(10-11-2020): ಪಟಾಕಿ ನಿಷೇಧದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಕಾಳಿ ಪೂಜೆ ಮತ್ತು ದೀಪಾವಳಿ ಸಮಯದಲ್ಲಿ ಪಟಾಕಿಗಳಿಗೆ ನಿಷೇಧ ಹೇರಿ ಕೊಲ್ಕತ್ತಾ ಹೈಕೋರ್ಟ್ ಹೊರಡಿಸಿದ ಆದೇಶವನ್ನು ಅದು ಎತ್ತಿ ಹಿಡಿದಿರುವುದು.
ಹಬ್ಬಹರಿದಿನಗಳ ಸಂಭ್ರಮಾಚರಣೆಗಳು ಮುಖ್ಯವೇ ಆಗಿದ್ದರೂ ಸಹಾ ಜನರ ಪ್ರಾಣವು ಅಪಾಯದಲ್ಲಿರುವಾಗ ಅದನ್ನು ತಡೆಯುವ ಪ್ರಯತ್ನ ಅಗತ್ಯವಿದೆಯೆಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟರು.
ಇದು ಕೊರೋನಾ ಸಾಂಕ್ರಾಮಿಕ ರೋಗದ ಸಂದಿಗ್ಧ ಕಾಲಘಟ್ಟವೆಂದೂ, ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿತು.