ವಿಟ್ಲ(16-10-2020): ಕೋವಿಡ್ ಕಾರಣದಿಂದ ಕೆಲಸ ಹಾಗೂ ವೇತನವಿಲ್ಲದೆ ಸಂಕಷ್ಟದಲ್ಲಿರುವ ಸುಮಾರು ನೂರಕ್ಕೂ ಮಿಕ್ಕಿದ ಮದ್ರಸ ಅಧ್ಯಾಪಕರ ಕುಟುಂಬಕ್ಕೆ ಕರ್ನಾಟಕ ಎಸ್.ವೈ.ಎಸ್. ದ.ಕ.ಸಮಿತಿ ವತಿಯಿಂದ ದಿನ ಬಳಕೆಯ ಅಗತ್ಯ ದಿನಸಿ ಸಾಮಾನುಗಳ ಕಿಟ್ ಗಳನ್ನು ವಿವಿಧ ವಲಯ ವ್ಯಾಪ್ತಿಯಲ್ಲಿ ವಿತರಿಸಲಾಗುತ್ತಿದ್ದು, ಇದರ ಭಾಗವಾಗಿ ವಿಟ್ಲ ವಲಯ ಎಸ್.ವೈ.ಎಸ್.ನೇತೃತ್ವದಲ್ಲಿ ಇಂದು ವಿಟ್ಲದಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಲಯಾಧ್ಯಕ್ಷ ಕೆ.ಎಲ್.ಉಮರ್ ದಾರಿಮಿ ಅವರು, ಇಂದಿನ ಸಂದಿಗ್ಧ ಘಟ್ಟದಲ್ಲಿ ಅದೆಷ್ಟೋ ಮದ್ರಸ ಅಧ್ಯಾಪಕರ ಕುಟುಂಬ ಸಂಕಷ್ಟದಲ್ಲಿದ್ದು, ಅಂತಹ ಕುಟುಂಬಗಳಿಗೆ ನೆರವಾಗಲು ಸಂಘಸಂಸ್ಥೆಗಳು ಹಾಗೂ ದಾನಿಗಳು ಮುಂದೆ ಬರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವನ್ನು ವಲಯ ಹನೀಫ್ ದಾರಿಮಿ ಸವಣೂರು ಉದ್ಗಾಟಿಸಿದರು. ಸಂಘಟನಯ ಕೋಶಾಧಿಕಾರಿ ಪಿ.ಎಂ.ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಪರ್ತಿಪ್ಪಾಡಿ ಜಮಾಅತ್ ಕಾರ್ಯದರ್ಶಿ ಖಲಂದರ್ ಪರ್ತಿಪ್ಪಾಡಿ, ಎಸ್ಕೆಎಸ್ಸಸ್ಸೆಫ್ ಸಾಲೆತ್ತೂರು ಕ್ಲಸ್ಟರ್ ಅಧ್ಯಕ್ಷ ಅಬ್ದುಸಲೀಂ ಪರ್ತಿಪ್ಪಾಡಿ, ಪರ್ತಿಪ್ಪಾಡಿ ಎಸ್.ವೈ.ಎಸ್. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮಾಮು ಟಿಪ್ಪು ನಗರ,ಉಬೈದ್ ವಿಟ್ಲಬಝಾರ್, ಅಬ್ದುರ್ರಹೀಂ ವಿಟ್ಲ ಮೊದಲಾದವರು ಶುಭ ಹಾರೈಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತಿಸಿ ಕೊನೆಗೆ ವಂದಿಸಿದರು.