ಕೇರಳ(26-02-2021): ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಎಂಟು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಚೆರ್ತಾಲಾ ಮತ್ತು ಅಂಬಲಪುಳ ತಾಲ್ಲೂಕುಗಳಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ. ಸಿಆರ್ಪಿಸಿಯ ಸೆಕ್ಷನ್ 144ರಡಿ ನಿಷೇಧಾಜ್ಞೆಯನ್ನು ಆಲಪ್ಪುಝ ಮತ್ತು ಅಂಬಲಾಪುಝಾ ತಾಲೂಕುಗಳಲ್ಲಿ ವಿಧಿಸಲಾಗಿದೆ.
ಚೆರ್ತಾಲಾ ಸಮೀಪದ ನಾಗಕುಲಂಗರದಲ್ಲಿ ಬುಧವಾರ ತಡರಾತ್ರಿ ಆರ್ಎಸ್ಎಸ್ ಶಾಖಾ ಮುಖ್ಯಸ್ಥ ರಾಹುಲ್ ಕೃಷ್ಣ ಹತ್ಯೆ ನಡೆದಿತ್ತು.