ಲಕ್ನೋ(27-02-2021): ಭಾರತದಲ್ಲಿ ಕೇವಲ ಒಂದು ಡಿಎನ್ಎ ಇದೆ ಮತ್ತು ಅದು “ಹಿಂದೂ” ಎಂದು ಆರ್ಎಸ್ಎಸ್ ಹಿರಿಯ ಮುಖಂಡ ದತ್ತಾತ್ರೇಯ ಹೊಸಬಲೆ ಹೇಳಿದ್ದಾರೆ.
ಸಂಘದಲ್ಲಿ, ಹಿಂದೂ ಒಂದು ರಾಷ್ಟ್ರವಾಚಕ ಪದವಾಗಿದೆ. ಭಾರತದಲ್ಲಿ ಒಂದು ಡಿಎನ್ಎ ಇದೆ ಮತ್ತು ಆ ಡಿಎನ್ಎ ಹೆಸರು ಹಿಂದೂ ಆಗಿದೆ. ಹಿಂದುತ್ವಕ್ಕೆ ಒಂದು ಗುರುತು ಇದೆ. ಜಾತ್ಯತೀತ ಎಂದು ಹೇಳಿಕೊಳ್ಳುವವರು ಅದನ್ನು ಕೋಮುವಾದವೆಂದು ಪ್ರಚಾರ ಮಾಡಿದ್ದಾರೆ. ಅದು ಒಂದು ವೈವಿಧ್ಯಮಯ ಕಲ್ಪನೆ, ಹಿಂದುತ್ವದ ಬಗ್ಗೆ ಆರ್ಎಸ್ಎಸ್ ಏನು ಹೇಳಿದರೂ ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಅಖಿಲ ಭಾರತ ಸಾ ಪ್ರಚಾರ್ ಪ್ರಮುಖ್ ಸುನಿಲ್ ಅಂಬೇಕರ್ ಬರೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿದ ನಂತರ ಹೊಸಬಲೆ ಮಾತನಾಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ – ಸ್ವರ್ಣಿಂ ಭಾರತ್ ಕೆ ದಿಶಾ ಸೂತ್ರ ಎಂಬ ಪುಸ್ತಕವನ್ನು ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ಹೊಸಬಲೆ ಬಿಡುಗಡೆ ಮಾಡಿದರು.