ತಿರುವನಂತಪುರಂ(11-01-2021): ಮಧ್ಯರಾತ್ರಿ ಕೋಳಿ ಮಾಂಸದ ಖಾದ್ಯವನ್ನು ನೀಡುವಂತೆ ಬೇಡಿಕೆ ಇಟ್ಟು ಹೊಟೇಲ್ ಗೆ ದುಷ್ಕರ್ಮಿಗಳಿಬ್ಬರು ಬೆಂಕಿ ಇಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಬೆಲ್ತರೋಡಿ ಪ್ರದೇಶದ ರಸ್ತೆ ಪಕ್ಕದ ಹೋಟೆಲ್ಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಶಂಕರ್ ಟೇಡೆ (29) ಮತ್ತು ಸಾಗರ್ ಪಟೇಲ್ (19) ಬೆಲ್ತರೋಡಿ ಪ್ರದೇಶದ ಹೋಟೆಲ್ಗೆ ಭೇಟಿ ನೀಡಿ ಬೆಳಿಗ್ಗೆ 1 ಗಂಟೆ ಸುಮಾರಿಗೆ ಚಿಕನ್ ನೀಡುವಂತೆ ಆಗ್ರಹಿಸಿದ್ದಾರೆ. ಹೋಟೆಲ್ ಮಾಲೀಕರು ತಮ್ಮ ಅಸಾಮರ್ಥ್ಯವನ್ನು ವ್ಯಕ್ತಪಡಿಸುತ್ತಿದ್ದಂತೆ, ಅವರು ಹೋಟೆಲ್ ಗೆ ಬೆಂಕಿ ಹಚ್ಚಿದ್ದಾರೆ.
ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೂ ಮೊದಲು ಮತ್ತೊಂದು ಪ್ರಕರಣದಲ್ಲಿ ಮಾಮಲ್ಲಾಪುರಂ ಬಳಿಯ ಕೆಲಂಬಕ್ಕಂನ ಹೋಟೆಲ್ ಗೆ ತೆರಳಿದ ವಕೀಲನೋರ್ವ ಸಸ್ಯಾಹಾರಿ ಆಹಾರವನ್ನು ನೀಡಿದ್ದಾರೆಂದು ಕೋಪಗೊಂಡು ಫೈರಿಂಗ್ ಮಾಡಿದ್ದಾರೆ.