ಮೊಹಾಲಿ(16-12-2020): ಗುಜರಾತ್ನ ರೈತ ಮುಖಂಡರನ್ನು ಸರಕಾರ ಗೃಹಬಂಧನದಲ್ಲಿಟ್ಟಿದೆ ಎಂದು ರೈತರು ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಡಿಸೆಂಬರ್ 6 ರ ಸಭೆಯಲ್ಲಿ ಹಾಜರಿದ್ದ ಪ್ರತಿಯೊಬ್ಬ ರೈತ ನಾಯಕನನ್ನು ಗುಜರಾತ್ ಆಡಳಿತವು ಗೃಹಬಂಧನದಲ್ಲಿರಿದೆ. ಯಾವುದೇ ಪ್ರತಿಭಟನೆಯ ಯೋಜನೆಗಳನ್ನು ಮಾಡದಂತೆ ರೈತರನ್ನು ಬಂಧನದಲ್ಲಿಡಲಾಗಿದೆ ಎಂದು ಆರೋಪ ಕೇಳಿಬಂದಿದೆ.
ಪ್ರಧಾನಿ ನರೇಂದ್ರ ಮೋದಿಯ ತವರು ರಾಜ್ಯದಲ್ಲಿ ಭಾರೀ ಪೊಲೀಸ್ ಕಣ್ಗಾವಲು ತಪ್ಪಿಸಿ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯಲ್ಲಿ ಸೇರಲು ಕೆಲ ರೈತರು ವೇಷವನ್ನು ಬದಲಾಯಿಸಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ರೈತರು ಮಾತ್ರ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ ಆದರೆ ಸತ್ಯವೆಂದರೆ ಗುಜರಾತ್ನ ರೈತರು ಇದಕ್ಕೆ ಸೇರ್ಪಡೆಗೊಳ್ಳುತ್ತಿಲ್ಲ ಏಕೆಂದರೆ ಅವರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.
ಗುಜರಾತ್ ಸರ್ಕಾರವು ಸೆಲ್ ಫೋನ್ಗಳು, ನಮ್ಮ ವಾಟ್ಸಾಪ್ ಚಾಟ್ಗಳು, ನಮ್ಮ ವಾಹನಗಳ ಚಲನೆ, ಜನರು ನಮ್ಮ ಮನೆಗಳಿಗೆ ಹೋಗುವುದನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಸರಕಾರ ಪೊಲೀಸರನ್ನು ನಿಯೋಜಿಸಿದೆ ಎಂದು ಜನಪ್ರಿಯ ರೈತ ಮುಖಂಡ ದೂರವಾಣಿ ಮೂಲಕ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ತೆರಳಲು ಪ್ರಯತ್ನಿಸುತ್ತಿದ್ದ ಗುಜರಾತ್ ರೈತ ಮುಖಂಡ ಯಾಕುಬ್ ಗುರಾಜಿಯನ್ನು ಪೊಲೀಸರು ತಡೆದಿದ್ದು, ತಮ್ಮ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿಸೆಂಬರ್ 11 ರಂದು ಎಂಟರಿಂದ 10 ಪೊಲೀಸ್ ಸಿಬ್ಬಂದಿ ನಾನು ದೆಹಲಿಗೆ ಹೋಗುವಾಗ ದಾರಿ ಮಧ್ಯೆ ತಡೆದರು. ಅವರು ಯಾವುದೇ ಆರೋಪಗಳನ್ನು ಮಾಡದೆ ನನ್ನನ್ನು ವಶಕ್ಕೆ ತೆಗೆದುಕೊಂಡರು ಮತ್ತು ಒಂದು ರಾತ್ರಿ ನನ್ನನ್ನು ಸೆಲ್ನಲ್ಲಿ ಇಟ್ಟುಕೊಂಡರು ಎಂದು ಅವರು ಹೇಳಿದರು.