ಬೆಂಗಳೂರು(13/10/2020): ಆರೋಗ್ಯ ಇಲಾಖೆಯನ್ನು ಕೇರಳ ಮಾದರಿಯಲ್ಲಿ ಸುಧಾರಣೆ ಮಾಡುವುದಾಗಿ ಎಂದು ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ಭರವಸೆ ನೀಡಿದ್ದಾರೆ.
ಕೋವಿಡ್19 ಅನ್ನು ನಿರ್ವಹಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ತೀವ್ರ ಟೀಕೆಯನ್ನು ಎದುರಿಸಿತ್ತು. ಆದ್ದರಿಂದ ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಅವರನ್ನು ಬದಲಾಯಿಸಿ ವೈದ್ಯಕೀಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರಿಗೆ ವಹಿಸಿಲಾಗಿತ್ತು. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಯನ್ನು ಕೇರಳ ಮಾದರಿಯ ಆರೋಗ್ಯ ಇಲಾಖೆಯನ್ನಾಗಿ ರೂಪಿಸುವುದು ಇಲಾಖೆಗೆ ಮೈಲುಗಲ್ಲಾಗಿ ಉಳಿಯುವ ಕೆಲಸ, ಅದನ್ನು ರಚನಾತ್ಮಕವಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ.