ನವದೆಹಲಿ : ಪಾಕಿಸ್ತಾನದ ಇಸ್ಲಾಮಿಕ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ)ಇಂದು ದಿಢೀರನೇ ಕೇರಳ,ಕರ್ನಾಟಕ ಮತ್ತು ದೆಹಲಿ ರಾಜ್ಯಗಳ ಹತ್ತು ಕಡೆಗಳಲ್ಲಿ ದಾಳಿ ಮಾಡಿದೆ.
“48 ಗಂಟೆಗಳ ಹಿಂದೆ ಎನ್ಐಎ ದಾಖಲಿಸಿಕೊಂಡ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿಢೀರ್ ದಾಳಿ ನಡೆದಿದೆ. ಸುಮಾರು 6 ರಿಂದ 7 ಮಂದಿಯ ಗುಂಪನ್ನು ತನಿಖಾ ಸಂಸ್ಥೆ ಕೆಲವು ದಿನಗಳಿಂದ ಮೇಲ್ವಿಚಾರಣೆ ನಡೆಸುತ್ತಿತ್ತು.ಈ ಸಂಬಂಧ ಎನ್ಐಎ ಕೇಸ್ ದಾಖಲಿಸಿಕೊಂಡಿತ್ತು.ಇದರ ಮುಂದುವರಿದ ಭಾಗವಾಗಿದೆ ಇಂದು ನಡೆದ ಬಂಧನ.ಸದ್ಯದ ದಾಳಿಯಲ್ಲಿ ಐವರು ಆರೋಪಿಗಳನ್ನ ಎನ್ಐಎ ಬಂಧಿಸಿದೆ’ ಎಂದು ಮೂಲಗಳು ತಿಳಿಸಿವೆ.